Sunday, March 23, 2008

ದಾಸನೆಂತಾಗುವೆನು




ದಾಸನೆಂತಾಗುವೆನು ಧರೆಯೊಳಗೆ ನಾನು
ವಾಸುದೇವನಲ್ಲಿ ಲೇಶಭಕುತಿ ಕಾಣೆ
ಗೂಟನಾಮವ ಹೋಡೆದು
ಗುಂಡು ತಂಬಿಕೆ ಹಿಡಿದು
ಗೋಟಂಚು ಧೋತರ ಮಡಿಯನ್ನುಟ್ಟು
ದಾಟುಗಾಲಟ್ಟು ನಾ ಬರಲೆನ್ನ
ಬೂಟಕತನ ನೋಡಿ ಭ್ರಮಿಸಿದಿರಿ ಜನರೇ
ಅರ್ಥದಲ್ಲೆ ಮನಸು ಆಸ್ಕತವಾಗಿದ್ದು
ವ್ಯರ್ಥವಾಯಿತು ಜನ್ಮ ವಸುಧೆಯೊಳಗೆ
ಅರ್ತಿಯಿಂದಲಿ ಹರಿಯ ಚರ್ಚಿಸದಿಲ್ಲ ನಾ
ಸತ್ಯ ಸೌಚಗಳಿರಿಯೆ ಸಜ್ಜನರು ಕೇಳಿ
ಇಂದಿರೇಶನ ಪೂಜೆ ಎಂದು ಮಾಡಿದ್ದಿಲ್ಲ
ಸಂಧ್ಯಾ ಜಪತಪಗಳರಿಯೆ
ಒಂದು ಸಾಧನ ಕಾಣೆ ಪುರಂಧರವಿಠಲನ
ದ್ವಂದ್ವಪಾದಗಳ ನಂಬಿ ಅರಿತು ಭಜಿಸದೆಲೆ
***

No comments: