Monday, February 16, 2009

ಹಿಂದಿನ ಸಾಲಿನ ಹುಡುಗರು

* ಕೆ. ಎಸ್. ನರಸಿಂಹಸ್ವಾಮಿ ಅವರ ಶಿಲಾಲತೆ ಕವನ ಸಂಕಲನದಿಂದ ಆಯ್ದ ಕವನ
ಬೆರಳಚ್ಚು ನೆರವು: ಕು| ಮಮತಾ. ವಿ.

ಹಿಂದಿನ ಸಾಲಿನ ಹುಡುಗರು ಎಂದರೆ
ನಮಗೇನೇನು ಭಯವಿಲ್ಲ!
ನಮ್ಮಿಂದಾಗದು ಶಾಲೆಗೆ ತೊಂದರೆ;
ನಮಗೆಂದೆಂದು ಜಯವಿಲ್ಲ!

ನೀರಿನ ಜೋರಿಗೆ ತೇಲದು ಬಂಡೆ;
ಅಂತೆಯೇ ನಾವೀ ತರಗತಿಗೆ!
ಪರೀಕ್ಷೆ ಎಂದರೆ ಹೂವಿನ ಚೆಂಡೆ ?
ಚಿಂತಿಸಬಾರದು ದುರ್ಗತಿಗೆ.

ವರುಷ ವರುಷವೂ ನಾವಿದ್ದಲ್ಲಿಯೇ
ಹೊಸ ವಿದ್ಯಾರ್ಥಿಗಳಾಗುವೆವು;
ಪುಟಗಳ ತೆರೆಯದೆ ತಟತಟ ಓದದೆ
ಬಿಸಿಲಿಗೆ ಗಾಳಿಗೆ ಮಾಗುವೆವು!

ಜೊತೆಯಲಿ ಕೂರುವ ತಮ್ಮತಂಗಿಯರ
ಓದುಬಾರವನು ನೋಯಿಸೆವು;
ನಮ್ಮಂತಾಗದೆ ಅವರೀ ಶಾಲೆಯ
ಬಾವುಟವೆರಿಸಲೆನ್ನುವೆವು.

ಸಂಬಳ ಸಾಲದ ಉಪಾಧ್ಯಾಯರಿಗೆ
ಬೆಂಬಲವಾಗಿಯೇ ನಿಲ್ಲುವೆವು;
ಪಾಠಪ್ರವಚನ ರುಚಿಸದೆ ಹೋದರೆ
ಪಾಕಂಪೊಪ್ಪನು ಮೆಲ್ಲುವೆವು.

ತರಗತಿಗೆನೋ ನಾವೇ ಹಿಂದು;
ಹಿಂದುಳಿದವರೇ ನಾವಿಲ್ಲಿ!
ಆಟದ ಬಯಲಲಿ ನೋಡಲಿ ಬಂದು
ಆಂಜನೇಯರೇ ನಾವಲ್ಲಿ!

ಪಂಪ ಕುಮಾರವ್ಯಾಸರ ದಾಸರ
ಹರಿಹರ ಶರಣರ ಕುಲ ನಾವು!
ಕನ್ನಡದಲ್ಲೇ ತೆರ್ಗಡೆಯಾಗದ
ಪಂಡಿತಪುತ್ರರ ಪಡೆ ನಾವು!

ಗೆದ್ದವರೆಲ್ಲಾ ನಮ್ಮವರೇ ಸರಿ;
ಗೆಲ್ಲುವಾತುರವೇ ನಮಗಿಲ್ಲ.
ಸೋತವರಿಗೆ ನಾವಿಲ್ಲವೇ ಮಾದರಿ?
ಕೆರೆಗೆ ಬೀಳುವಿದು ತರವಲ್ಲ.

ಗೆದ್ದವರೇರುವ ಭಾಗ್ಯದ ದಾರಿಗೆ
ಕದಲದ ದೀಪಗಳಾಗುವೆವು;
ಹಲವರು ಸೋಲದೆ ಕೆಲವರ ಗೆಲುವಿಗೆ
ಬೆಲೆಯಿರದೆಂದೆ ನಂಬಿಹೆವು.

ಊರಿಗೆ ಊರೇ ಹಸೆಯಲಿ ನಿಂತರೆ
ಆರತಿ ಬೆಳಗಲು ಜನವೆಲ್ಲಿ?
ಎಲ್ಲ ಹಾಡುವ ಬಾಯೇ ಆದರೆ
ಚಪ್ಪಾಳೆಗೆ ಜನವಿನ್ನೆಲ್ಲಿ?

ಲೋಕದ ಶಾಲೆಯ ಬಾಗ್ಯದ ಸೆರೆಯಲಿ
ಅನಂತಸುಖವನು ಕಂಡಿಹೆವು.
ಇದೇ ಸತ್ಯವೆಮಗಿದರಾಸರೆಯಲಿ
ಜಯಾಪಜಯಗಳ ದಾಟುವೆವು.

ಪುಸ್ತಕ ಓದದೆ ಪ್ರೀತಿಯನರಿತೆವು;
ಗೆಲ್ಲದೆ ಹೆಮ್ಮೆಯ ಗಳಿಸಿದೆವು;
ನಾವೀ ಶಾಲೆಯನೆಂದು ಬಿಡೆವು;
ನೆಮ್ಮದಿಯಾಗಿಯೇ ಉಲಿಯುವೆವು!

ಹಿಂದಿನ ಸಾಲಿನ ಹುಡುಗರು

* ಕೆ. ಎಸ್. ನರಸಿಂಹಸ್ವಾಮಿ ಅವರ ಶಿಲಾಲತೆ ಕವನ ಸಂಕಲನದಿಂದ ಆಯ್ದ ಕವನವವನ್ನು ಟೈಪ್ ಮಾಡಿ ಕೊಟ್ಟವರು ಕು| ಮಮತ ವಿ.

ಹಿಂದಿನ ಸಾಲಿನ ಹುಡುಗರು ಎಂದರೆ
ನಮಗೇನೇನು ಭಯವಿಲ್ಲ!
ನಮ್ಮಿಂದಾಗದು ಶಾಲೆಗೆ ತೊಂದರೆ;
ನಮಗೆಂದೆಂದು ಜಯವಿಲ್ಲ!

ನೀರಿನ ಜೋರಿಗೆ ತೇಲದು ಬಂಡೆ;
ಅಂತೆಯೇ ನಾವೀ ತರಗತಿಗೆ!
ಪರೀಕ್ಷೆ ಎಂದರೆ ಹೂವಿನ ಚೆಂಡೆ ?
ಚಿಂತಿಸಬಾರದು ದುರ್ಗತಿಗೆ.

ವರುಷ ವರುಷವೂ ನಾವಿದ್ದಲ್ಲಿಯೇ
ಹೊಸ ವಿದ್ಯಾರ್ಥಿಗಳಾಗುವೆವು;
ಪುಟಗಳ ತೆರೆಯದೆ ತಟತಟ ಓದದೆ
ಬಿಸಿಲಿಗೆ ಗಾಳಿಗೆ ಮಾಗುವೆವು!

ಜೊತೆಯಲಿ ಕೂರುವ ತಮ್ಮತಂಗಿಯರ
ಓದ್ಹುಬಾರವನು ನೋಯಿಸೆವು;
ನಮ್ಮಂತಾಗದೆ ಅವರೀ ಶಾಲೆಯ
ಬಾವುತವೆರಿಸಲೆನ್ನುವೆವು.

ಸಂಬಳ ಸಾಲದ ಉಪಾದ್ಯಾಯರಿಗೆ
ಬೆಂಬಲವಾಗಿಯೇ ನಿಲ್ಲುವೆವು;
ಪಾಠಪ್ರವಚನ ರುಚಿಸದೆ ಹೋದರೆ
ಪಾಕಂಪೊಪ್ಪನು ಮೆಲ್ಲುವೆವು.

ತರಗತಿಗೆನೋ ನಾವೇ ಹಿಂದು;
ಹಿಂದುಳಿದವರೇ ನಾವಿಲ್ಲಿ!
ಆಟದ ಬಯಲಲಿ ನೋಡಲಿ ಬಂದು
ಆಂಜನೆಯರೇ ನಾವಲ್ಲಿ!

ಪಂಪ ಕುಮಾರವ್ಯಾಸರ ದಾಸರ
ಹರಿಹರ ಶರಣರ ಕುಲ ನಾವು!
ಕನ್ನಡದಲ್ಲೇ ತೆರ್ಗದೆಯಾಗದ
ಪಂಡಿತಪುತ್ರರ ಪದೆನಾವು!

ಗೆದ್ದವರೆಲ್ಲಾ ನಮ್ಮವರೇ ಸರಿ;
ಗೆಲ್ಲುವಾತುರವೇ ನಮಗಿಲ್ಲ.
ಸೋತವರಿಗೆ ನಾವಿಲ್ಲವೇ ಮಾದರಿ?
ಕೆರೆಗೆ ಬೀಳುವಿದು ತರವಲ್ಲ.

ಗೆದ್ದವರೇರುವ ಬಾಗ್ಯದ ದಾರಿಗೆ
ಕದಲದ ದೀಪಗಲಾಗುವೆವು;
ಹಲವರು ಸೋಲದೆ ಕೆಲವರ ಗೆಲುವಿಗೆ
ಬೆಲೆಯಿರದೆಂದೆ ನಂಬಿಹೆವು.

ಊರಿಗೆ ಊರೇ ಹಸೆಯಲಿ ನಿಂತರೆ
ಆರತಿ ಬೆಳಗಲು ಜನವೆಲ್ಲಿ?
ಎಲ್ಲ ಹಾಡುವ ಬಾಯೇ ಆದರೆ
ಚಪ್ಪಾಳೆಗೆ ಜನವಿನ್ನೆಲ್ಲಿ?

ಲೋಕದ ಶಾಲೆಯ ಬಾಗ್ಯದ ಸೆರೆಯಲಿ
ಅನಂತಸುಕವನು ಕಂಡಿಹೆವು.
ಇದೇ ಸತ್ಯವೆಮಗಿದರಾಸರೆಯಲಿ
ಜಯಾಪಜಯಗಳ ದಾಟುವೆವು.

ಪುಸ್ತಕ ಓದದೆ ಪ್ರೀತಿಯನರಿತೆವು;
ಗೆಲ್ಲದೆ ಹೆಮ್ಮೆಯ ಗಳಿಸಿದೆವು;
ನಾವೀ ಶಾಲೆಯನೆಂದು ಬಿಡೆವು;
ನೆಮ್ಮದಿಯಾಗಿಯೇ ಉಲಿಯುವೆವು!