Sunday, April 20, 2008

ಮಧುಕರ ವೃತ್ತಿ ಎನ್ನದು.

ಮಧುಕರ ವೃತ್ತಿ ಎನ್ನದು.
ಪದುಮನಾಭನ ಪಾದ ಪದುಮ ಮಧುಪವೆಂಬ ಮಧುಕರ ವೃತ್ತಿ ಎನ್ನದು.
ಕಾಲಿಗೆ ಗೆಜ್ಜೆ ಕಟ್ಟಿ ನೀಲವರ್ಣನ ಗುಣ ಆಲಾಪಿಸುತ ಬಲು ಓಲಗ ಮಾಡುವಂತ
ರಂಗನಾಥನ ಗುಣ ಹಿಂಗದೆ ಪಾಡುತ್ತ ಶೃಂಗಾರ ನೋಡುತ್ತ ಕಂಗಳ ಆನಂದವೆಂಬ
ಇಂದಿರಾಪತಿ ಪುರಂದರ ವಿಠಲನಲ್ಲಿ ಚಂದದ ಭಕ್ತಿಯಿಂದ ಆನಂದ ಪಡುವಂತ

No comments: